*ರಾಷ್ಟ್ರಕ್ಕೆ ಆಧ್ಯಾತ್ಮಿಕ ಜ್ಞಾನವನ್ನು ನೀಡಿದ ರಾಷ್ಟ್ರ ಅದು ನಮ್ಮ ಭಾರತ : - ಶಾಕೀರ್ ಸನದಿ*
*ಧಾರವಾಡ (ಕರ್ನಾಟಕ ವಾರ್ತೆ) ಏ.2:* ಭಾರತ ದೇಶ ಪ್ರಪಂಚದಲ್ಲಿ ಒಂದು ಶ್ರೇಷ್ಠವಾದ ದೇಶ. ನಮ್ಮಲ್ಲಿ ಶ್ರೇಷ್ಠರಾದ ಶರಣರು, ವಚನಕಾರರು ಇದ್ದಾರೆ. ಇಡೀ ರಾಷ್ಟ್ರಕ್ಕೆ ಆಧ್ಯಾತ್ಮಿಕ ಜ್ಞಾನವನ್ನು ನೀಡಿದ ರಾಷ್ಟ್ರ ನಮ್ಮ ಭಾರತ ದೇಶವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಅವರು ಹೇಳಿದರು.
ಅವರು ಇಂದು (ಏ.2) ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜ್ಞಾನ, ಅವರ ವಚನಗಳು ಪ್ರತಿಯೊಬ್ಬರ ಮನೆಮನೆಗೂ ಮುಟ್ಟುವ ವ್ಯವಸ್ಥೆ ಆಗಬೇಕು. ಈ ತರಹದ ಶರಣರನ್ನು ನಾವು ಕೇವಲ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿ ನೋಡಬಾರದು ಎಂದು ಹೇಳಿದರು.
ಧಾರವಾಡ ಜಿಲ್ಲಾ ದೇವಾಂಗ ಸಂಘ ಅಧ್ಯಕ್ಷ ಡಾ. ಕೆ.ಜಿ. ಬ್ಯಾಕೋಡಿ ಅವರು ಮಾತನಾಡಿ, 10 ನೇ ಶತಮಾನದಲ್ಲಿ ನಮ್ಮ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರು ಅವರು ಆದ ನಂತರ ಸಾಕಷ್ಟು ಶರಣರು ಬಂದಿದ್ದಾರೆ. ಬಸವಣ್ಣವರು ಕೂಡ ಬಂದಿದ್ದಾರೆ. ಬಸವಣ್ಣನವರು ವಚನಗಳನ್ನು ಅತ್ಯಂತ ಸರಳ ಭಾμÉಯಲ್ಲಿ ಬರೆದಿದ್ದಾರೆ. ಆದರೆ ದೇವರ ದಾಸಿಮಯ್ಯನವರ ವಚನ ಹೇಗೆ ಎಂದರೆ ಕನ್ನಡ, ಹಳಗನ್ನಡ ಬಗ್ಗೆ ಜ್ಞಾನವಿದ್ದರೆ ಮಾತ್ರ ಅದು ತಿಳಿಯುತ್ತದೆ. ಕೇವಲ ಓದಿದರೆ ಅದು ತಿಳಿಯುವುದಿಲ್ಲ, ಆ ವಚನಗಳಿಗೆ ಅಷ್ಟು ಶಕ್ತಿ ಇದೆ ಎಂದು ಹೇಳಿದರು.
ಜಗದೀಶ ಜವಳಿ ಅವರು ಮಾತನಾಡಿ, ದಾಸಿಮಯ್ಯನವರ ಆಧುನಿಕತೆ ಮತ್ತು ಪ್ರಭಾವವು ನಮ್ಮ ಇಂದಿನ ಸಮಾಜದಲ್ಲೂ ಪ್ರಸ್ತುತವಾಗಿವೆ. ಜಾತಿ-ಮತ ಭೇದ, ಅಸಹಿಷ್ಣುತೆ, ಮತ್ತು ಅಸಮಾನತೆಯನ್ನು ನಿವಾರಿಸಲು ಅವರ ಸಂದೇಶಗಳು ನಮಗೆ ಪಾಠವಾಗಬೇಕು. ಶ್ರಮ ಮತ್ತು ಪ್ರಾಮಾಣಿಕತೆಯಿಂದ ಬದುಕಿದರೆ ದೇವರ ಅನುಗ್ರಹ ದೊರೆಯುತ್ತದೆ ಎಂಬ ಅವರ ತತ್ವ ಸದಾ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.
ರಾಣೆಬೆನ್ನೂರ ನಿವೃತ್ತ ಪ್ರೌಢಶಾಲಾ ಶಿಕ್ಷಕÀ ಎಸ್.ಕೆ.ದುರ್ಗದಸೀಮಿ ಅವರು ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಅವರ ಜೀವನ ಚರಿತ್ರೆ ಕುರಿತು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಇಂಜಿನಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ರವಿ ಡೊಳ್ಳಿ ಅವರು ವಂದಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಅಜಿತ್ ದೇಸಾಯಿ, ಧಾರವಾಡ ದೇವಾಂಗ ಸಂಘ ಅಧ್ಯಕ್ಷ ವಿನೋದ ಹುಲಿಮನಿ, ಬೆಂಗಳೂರು ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಪಾಟೀಲ, ಧಾರವಾಡ ದೇವಾಂಗ ನೇಕಾರ ಅಭಿವೃದ್ದಿ ಸಂಘದ ಅಧ್ಯಕ್ಷ ರವಿ ಲೋಲೆ, ಬನಶಂಕರಿ ದೇವಾಂಗ ಸಂಘದ ಅಧ್ಯಕ್ಷ ಬಸವರಾಜ ಕೊಂಗಿ, ಬಸವರಾಜ ಕುಸುಬಿ, ಸಮಾಜದ ಮುಖಂಡ ರಾಮು ತಾರೆನ್ನವರ ಮತ್ತು ಉಪ್ಪಿನ ಬೆಟಗೇರಿ ಸಮಾಜದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮುದಾಯದ ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
********