*ನಿವೃತ್ತ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಅಭಿನಂದನಾ ಸಮಾರಂಭ*
*ಎಸ್.ಬಿ.ವಿ ಅವರು ಬಡತನದಲ್ಲಿ ಹುಟ್ಟಿ, ಅರಳಿದ ಮಲ್ಲಿಗೆ ಹೂವು; ವಸ್ತ್ರಮಠ ಅವರ*
*ವೃತ್ತಿ, ಬದಕು ಎಲ್ಲರಿಗೂ ಮಾದರಿ: ಜಗದ್ಗುರು ಫಕ್ಕೀರ ಸಿದ್ಧರಾಮ ಸ್ವಾಮಿಗಳು*
*ಧಾರವಾಡ (ಕರ್ನಾಟಕ ವಾರ್ತೆ) ಏ.05:* ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಅವರು ಬಡತನದಲ್ಲಿ ಹುಟ್ಟಿ ಅರಳಿದ ಮಲ್ಲಿಗೆ ಹೂವು. ಅವರು ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಸಾಧನೆ ಮುಡಿಗೇರಿಸಿಕೊಂಡಿದ್ದಾರೆ. ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿದೆ ಎಂದು ಶಿರಹಟ್ಟಿ ಸಂಸ್ಥಾನ ಮಠದ ಜಗದ್ಗುರು ಫಕ್ಕೀರ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.
ಅವರು ಇಂದು (ಏ.05) ಬೆಳಿಗ್ಗೆ ಆಲೂರು ವೆಂಕಟರಾವ ಸಭಾಭವನದಲ್ಲಿ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಅವರ ನಿವೃತ್ತಿ ಪ್ರಯುಕ್ತ ಜರುಗಿದ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡಿದರು.
ಸರಕಾರಿ ನೌಕರ ಸೇವೆಯಲ್ಲಿದ್ದಾಗ ನೀತಿ, ತತ್ತ್ವ, ಸಿದ್ದಾಂತಗಳಿಗೆ ಬದ್ಧನಾಗಿ ವೃತ್ತಿ ನಿರ್ವಹಿಸಬೇಕು. ನಿವೃತ್ತಿ ನಂತರ ತನ್ನ ಅನುಭವದ ಆಧಾರದಲ್ಲಿ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಸಾರ್ಥಕತೆ, ಸಮಾದಾನ ಸಿಗುತ್ತದೆ ಮತ್ತು ಅವರ ಪರೊಪಕಾರಿ, ಜೀವಪರ ಚಿಂತನೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದರು.
ಎಸ್.ಬಿ.ವಸ್ತ್ರಮಠ ಅವರು ಆತ್ಮಸಾಕ್ಷಿಯಾಗಿ ಮತ್ತು ಮನಸ್ಸು ಸಾಕ್ಷಿಯಾಗಿ ಬದುಕಿದವರು. ಪ್ರಾಮಾಣಿಕವಾಗಿ ಕಾಯಕವನ್ನು ಮಾಡಿ, ಸುಮಾರು ವರ್ಷದವರೆಗೆ ನ್ಯಾಯಾಧೀಶರಾಗಿ ಕೆಲಸವನ್ನು ಮಾಡಿ, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ನಿವೃತ್ತ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಅವರಿಗೆ ಬಾಲ್ಯದ ಬಡತನವೇ ಜೀವನದ ಪಾಠ ಕಲಿಸಿದೆ. ಧರ್ಮದ ಮಾರ್ಗದಲ್ಲಿ ನಡೆದು, ವೃತ್ತಿ ಮೌಲ್ಯ ಕಾಪಾಡಿಕೊಂಡು ಬಂದಿದ್ದಾರೆ. ಅವರ ವೃತ್ತಿ ಮತ್ತು ಬದುಕು ಇತರರಿಗೆ ಮಾದರಿ ಆಗಿದೆ ಎಂದು ಫಕ್ಕೀರ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಧಾರವಾಡ ಮುರಘಾಮಠ ಮ.ನಿ.ಪ್ರ.ಮಲ್ಲಿಕಾರ್ಜುನ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ಭೂಮಿಯ ಮೇಲೆ ನೂರು ವರ್ಷ ಬದುಕುತ್ತಾನೆ. ಹಾಗೆ ಹದ್ದು ಕೂಡ ನೂರು ವರ್ಷ ಬದುಕುವುದು. ಆದರೆ ಹದ್ದಿನ ಹಾಗೆ ಬದುಕುವುದು ಬದುಕಲ್ಲ. ಹೇಗೆ ಬದುಕಬೇಕು ಎಂಬುವುದು ಬಸವಣ್ಣವರ ತಮ್ಮ ವಚನದಲ್ಲಿ ಹೇಳಿದ್ದಾರೆ. ಆತ್ಮ ಸಾಕ್ಷಿಯಾಗಿ ಬದುಕಬೇಕು. ಮತ್ತು ಮನ ಸಾಕ್ಷಿಯಾಗಿ ಬದುಕಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವಿಕರಿಸಿ ಪ್ರಧಾನ ಜಿಲ್ಲಾ ನ್ಯಾಯಾದೀಶ ಎಸ್.ಬಿ.ವಸ್ತ್ರಮಠ ಅವರು ಮಾತನಾಡಿ, ಜೀವನದಲ್ಲಿ ನಾನು ಕಷ್ಟವನ್ನು ಕಂಡಿದ್ದೇನೆ. ಸುಖವನ್ನು ನೋಡಿದ್ದೇನೆ. ಒಂದು ರೂಪಾಯಿಯಲ್ಲಿಯೂ ಚಹಾ ಕುಡಿದಿದ್ದೇನೆ. ಅದೇ ರೀತಿಯಾಗಿ 500 ರೂಪಾಯಿ ಕೊಟ್ಟು ರೇಸಿಡೆನ್ಸಿ ಹೋಟೆಲ್ನಲ್ಲಿಯೂ ಸಹ ಚಹಾ ಕುಡಿದಿದ್ದೇನೆ. ಆದರೆ ನಾವು ಒಂದರಿಂದ ಎರಡು ಲಕ್ಷದವರೆಗೆ ಸಂಬಳ ಪಡೆದುಕೊಂಡರು ನೆಮ್ಮದಿಯ, ಖುಷಿಯ ಜೀವನ ಮಾಡಲು ಆಗುತ್ತಿಲ್ಲ ಎಂದರು.
ಮೊದಲು ಒಂದು ರೂಪಾಯಿ ಇದ್ದರು ಜೀವನದಲ್ಲಿ ಸಂತಸದಿಂದ ಪ್ರೀತಿಯಿಂದ ಇರುತ್ತಿದ್ದೆವು. ಸಣ್ಣ ವಯಸ್ಸಿನಲ್ಲಿ ಅಪ್ಪ ಕೊಟ್ಟ ಒಂದು ರೂಪಾಯಿ ಮನಸ್ಸಿಗೆ ಆನಂದ ತರುತಿತ್ತು. ಮೂರರಿಂದ ನಾಲ್ಕು ದಿನಗಳವರೆಗೆ ಆ ಒಂದು ರೂಪಾಯಿ ನೋಡಿಕೊಂಡು ಸಂತಸದಿಂದ ಆಡಿ, ನೆಲದಿದ್ದೆವೆ. ಅದೇ ಒಂದು ರೂಪಾಯಿ ಕಳೆದುಕೊಂಡಾಗ ಮೂರು ದಿನ ಊಟ ಬಿಟ್ಟು, ಹುಡುಕಿದ್ದು ಇದೆ. ಆದರೆ ನಾವು ಈ ದಿನಗಳಲ್ಲಿ ಒಂದರಿಂದ ಎರಡು ಲಕ್ಷದವರೆಗೆ ಸಂಬಳವನ್ನು ಪಡೆದರೂ, ಆ ಖುಷಿ ನೆಮ್ಮದಿ ಸಿಗುವುದಿಲ್ಲ. ಹಾಗೆ ಜೀವನವೆಂಬುವುದು ನಿಂತ ನಿರಾಗಬಾರದು. ಮುಂದಕ್ಕೆ ಸಾಗಿ ನದಿಗಳ ಮೂಲಕ ಸಾಗರವನ್ನು ಸೇರುವ ಮಾರ್ಗವನ್ನು ಕಂಡುಕೊಂಡು ಮುಂದೆ ಸಾಗಿ ಸಾಧನೆ ಮಾಡುವ ಗುರಿಯನ್ನು ಹೊಂದಬೇಕು ಎಂದು ಅವರು ಹೇಳಿದರು.
ಬಡತನದಲ್ಲಿ ಬೆಂದ ನಾನು ಮತ್ತು ನನ್ನ ಸಹೋದರರು ಮುರಘಾ ಮಠದಲ್ಲಿ ಇದ್ದು, ವಿದ್ಯಾಭ್ಯಾಸ ಮಾಡಿ ಧಾರವಾಡದಲ್ಲಿ ವಕೀಲ ವೃತ್ತಿಯನ್ನು ಮಾಡಿದ್ದೇನೆ. ಜೀವನದಲ್ಲಿ ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ. ತಾಳ್ಮೆಯಿಂದ ಜೀವನ ಸಾಗಿಸಿದರೆ, ನಮ್ಮ ಕಡೆಯಿಂದ ಆಗುವ ತಪ್ಪು ಘಟನೆಗಳನ್ನು ತಡೆಯಬಹುದು ಎಂದರು.
ಕಾನೂನಿನ ಚೌಕಟ್ಟಿನಲ್ಲಿ ನಾನು ಕೆಲಸ ಮಾಡಿದ್ದೇನೆ. ನಂತರ ನಾನು ಧರ್ಮವನ್ನು ನಂಬಿದ್ದೇನೆ. ಆದ್ದರಿಂದ ನಾನು ಕಾನೂನು ಮತ್ತು ಧರ್ಮದ ಮಾರ್ಗದಲ್ಲಿ ಕೆಲಸವನ್ನು ಮಾಡಿದ್ದೇನೆ ಎಂದು ತಮ್ಮ ಜೀವನದಲ್ಲಿ ಆದ ಘಟನೆಗಳ ಬಗ್ಗೆ ಎಳೆಹಳೆಯಾಗಿ, ವಿವರಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಮಾರಾಟ ಇಲಾಖೆಯ ರಾಜ್ಯ ನಿರ್ದೇಶಕ ಶಿವಾನಂದ ಕಾಪಶಿ ಮತ್ತು ಧಾರವಾಡದ ಹಿರಿಯ ನ್ಯಾಯವಾದಿ ಎ.ಸಿ.ಚಾಕಲಬ್ಬಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೀಪಾ ಪತ್ತಾರ ಪ್ರಾರ್ಥಿಸಿದರು. ಪೆÇ್ರ. ಸಿದ್ದಯ್ಯ ವಸ್ತ್ರಮಠ ಸ್ವಾಗತಿಸಿದರು. ವಿನಾಯಕ ವಸ್ತ್ರಮಠ ವಂದಿಸಿದರು. ಡಾ. ಜಗದತ್ತ ಹಡಗಲಿ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಎಸ್.ಬಿ.ವಸ್ತ್ರಮಠ ಅವರ ಗೆಳೆಯರ ಬಳಗ ಹಾಗೂ ಕುಟುಂಬದ ಸದಸ್ಯರು, ಬಂಧುಗಳು, ಗುರು ಹಿರಿಯರು, ಅವರ ಅಭಿಮಾನಿಗಳು ಭಾಗವಹಿಸಿದ್ದರು.
*******