DHARWAD:ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ

ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ

 ಧಾರವಾಡ : ಗುತ್ತಿಗೆದಾರರ ಸಮಸ್ಯೆಗಳನ್ನು  ಪರಿಹರಿಸುವಂತೆ  ಮುಖ್ಯಮಂತ್ರಿ ಯನ್ನು ಒತ್ತಾಯಿಸಿ  ಧಾರವಾಡ ಜಿಲ್ಲೆ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸುಭಾಸ ಪಾಟೀಲ್ ನೇತೃತ್ವದಲ್ಲಿ  ನವಲಗುಂದದಲ್ಲಿ  ಪ್ರತಿಭಟನಾ ಮೆರವಣಿಗೆ ನಡೆಸಿ ತಹಶಿಲ್ದಾರರಿಗೆ ಮನವಿ ಅರ್ಪಿಸಿದರು.
    ಈಗ ಸುಮಾರು 4 ವರ್ಷದಿಂದ  ಸಮಸ್ಯೆಗಳಿಂದ ನರಳುತ್ತಿದ್ದಾರೆ . ವಿಶೇಷವಾಗಿ ನವಲಗುಂದ ತಾಲೂಕಿನಲ್ಲಿ ಎಲ್ಲಾ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿ ಗೆ KRIDL ( Land Army ) ಹಸ್ತಾಂತರಿಸುತ್ತಿದ್ದಾರೆ ಹೀಗಾಗಿ  ಸಣ್ಣ ಗುತ್ತಿಗೆದಾರರು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ . ಅಲ್ಲದೇ   ಸರ್ಕಾರ ಗಮನಹರಿಸಿ ಗುತ್ತಿಗೆದಾರರನ್ನು ಈ ಸಮಸ್ಯೆಗಳಿಂದ ಪಾರುಮಾಡಬೇಕೆಂದು  ಸಂಘವು ಆಗ್ರಹಿಸಿದೆ.

 ಪ್ರತಿಭಟನೆಯಲ್ಲಿ ಧಾರವಾಡ ಜಿಲ್ಲೆ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ  ಸುಭಾಷ್ ಪಾಟೀಲ್,  ಎಮ್.ಎಸ್.ದಿಂಡಿ ಚವ್ಹಾಣ ,  ವೆಂಕಣ್ಣ ಬಂಡಿವಡ್ಡರ ,  ಜಿ.ವಾಯ್.ಪಾಟೀಲ ,  ಜಹಾಗೀರದಾರ , ಮಂಜುನಾಥ ಕಾಲವಾಡ ,  ಯಲ್ಲಪ್ಪಾ ದುಂದು‌ ,  ಎಮ್.ಎಸ್.ಮನಗೂಳಿ ,  ಆನಂದ ಚವಡಿ ,  ಬಿ.ಎಲ್.ಪಾಟೀಲ್ ,   ಎಸ್.ಕೆ.ಹಿರೇಮಠ ,  ಶಿವು ಹಾಲದೋಟರ ಮುಂತಾದವರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال