Dharwadಮಕ್ಕಳ ಅಕಾಡಮಿಗೆ ರಜತ ಮಹೋತ್ಸವ ಸಂಭ್ರಮ :

DHಮಕ್ಕಳ ಅಕಾಡಮಿಗೆ ರಜತ ಮಹೋತ್ಸವ ಸಂಭ್ರಮ : 25 ಸಾವಿರ ಮಕ್ಕಳನ್ನು ಆರೋಗ್ಯವಂತರಾಗಿ ಮಾಡಲು ಚಿಂತನೆ - ಡಾ ರಾಜನ್ ದೇಶಪಾಂಡೆ.
  ಧಾರವಾಡ 14 : ನಗರದ   ಮಕ್ಕಳ ಅಕಾಡಮಿಯು ರಜತ ಮಹೋತ್ಸವದ ಸಂಭ್ರಮಾಚರಣೆ ಆಚರಿಸುತ್ತಿದ್ದು 25,000 ಮಕ್ಕಳನ್ನು ಆರೋಗ್ಯವಂತರಾಗಿ ಮಾಡಲು ಚಿಂತನೆಯನ್ನು ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ  ಹಲವಾರು ಯೋಜನೆಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಕಾಡಮಿ ಅಧ್ಯಕ್ಷರಾದ ಖ್ಯಾತ ಮಕ್ಕಳ ವೈದ್ಯರಾದ ಡಾ . ರಾಜನ್ ದೇಶಪಾಂಡೆ ತಿಳಿಸಿದರು.
     ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ,  ಸಮಾಜಮುಖಿ ಮಿತ್ರರ  ಸಹಾಯದೊಂದಿಗೆ ಈ ಅಕಾಡೆಮಿಯನ್ನು ಸ್ಥಾಪಿಸಿ ಇದರ ಸಂಸ್ಥಾಪಕ , ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದೆನೆ. ಮಕ್ಕಳ ಅಕಾಡೆಮಿಯಲ್ಲಿ ಖ್ಯಾತ ಮಕ್ಕಳ ತಜ್ಞರು , ಮನೋವೈದ್ಯರು , ಶಿಕ್ಷಣ ತಜ್ಞರು , ಮಾನವ ಸಂಪನ್ಮೂಲ ಪರಿಣಿತರು . ಕಲಾಕಾರರು , ಸಾಹಿತಿಗಳು , ಲೇಖಕರು , ನಿವೃತ್ತ ಅಧಿಕಾರಿಗಳು ಸದಸ್ಯರಾಗಿರುತ್ತಾರೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ ಎಂದರು.

 ರಜತ ಮಹೋತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ .  ವರ್ಷಪೂರ್ತಿ 25000 ವಿದ್ಯಾರ್ಥಿಗಳಿಗೆ ಆರೋಗ್ಯದಂತೆ ಶಿಬಿರ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ತಿಳುವಳಿಕೆ ಹಾಗೂ ಚರ್ಚೆ .  ಸಣ್ಣ ಮಕ್ಕಳಿಗಾಗಿ ಬರೆದ 25 ಕಿರುಪುಸ್ತಕಗಳು ಪುಕಟಿಸಲಾಗುವುದು .  ಅಳ್ಳಾವರ ಸಮೀಪದ ಮಡಕಿಕೊಪ್ಪ ಹಿಂದುಳಿದ ಗ್ರಾಮವನ್ನು ದತ್ತಿ ತೆಗೆದುಕೊಳ್ಳುವುದು . ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಕಾರ್ಯಕ್ರಮಗಳನ್ನು ಸಂಘಟಿಸುವುದು  ಎಂದರು.

 25 ಅಸಾಮಾನ್ಯ ಸಾಧಕರನ್ನು ಸನ್ಮಾನಿಸಲಾಗುವುದು .  ಮಕ್ಕಳಿಗೆ ಮಾನಸಿಕ ದೈಹಿಕ , ಸಮಗ್ರ ಬೆಳವಣಿಗೆಗೆ ಸಂಬಂಧಿಸಿದ 25 ಸಂಚಿಕೆಯ ಆಕಾಶವಾಣಿ ಕಾರ್ಯಕ್ರಮಗಳ ಪ್ರಸಾರ ,  ಮಕ್ಕಳಿಗಾಗಿ ಮತ್ತು ಪಾಲಕರಿಗಾಗಿ ಕ್ರಿಜ್ ಮತ್ತು ಸಾಮಾನ್ಯ ಜ್ಞಾನ ಕುರಿತು ಸ್ಪರ್ಧೆ ಏರ್ಪಡಿಸುವುದು ಎಂದರು.

   ಶಾಲೆಗಳಲ್ಲಿ  ಮಕ್ಕಳ ವೈದ್ಯರು ಕಾರ್ಯಕ್ರಮಗಳು ,  ಸ್ಮರಣ ಸಂಚಿಕೆ ಪ್ರಕಟಿಸುವುದು .  ಮಕ್ಕಳಿಗಾಗಿ  ಧಾರವಾಡ ಆದರ್ಶ ಸ್ಪರ್ಧೆ ಆಯೋಜನೆ ,   ಪರೀಕ್ಷಾ ಭಯ ನಿವಾರಣೆ  ಶಾಲೆಗಳು ಮತ್ತು ಕಾಲೇಜುಗಳಿಗೆ ಕುರಿತು ಕಾರ್ಯಗಾರ ,  STEM ವಿಜ್ಞಾನ ಪ್ರದರ್ಶನ ಆಯೋಜಿಸುವದು ಸೇರಿದಂತೆ ಹಲವಾರು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.

  ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಎಮ್.ವಾಯ್.ಸಾವಂತ, ಡಾ.ಆನಂದ ಪಾಂಡುರಂಗಿ, ಸಿ.ಯು.ಬೆಳ್ಳಕ್ಕಿ  ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನವೀನ ಹಳೆಯದು

نموذج الاتصال