ಹಳಿಯಾಳ ವೃತದ ಅರಣ್ಯ ಕಚೇರಿಯನ್ನು ಧಾರವಾಡ ವೃತ್ತಕ್ಕೆ ತಕ್ಷಣ ವರ್ಗಾವಣೆ.
ಅಳ್ಳಾವರ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇನರಾ ವಿಭಾಗದ ಹಳಿಯಾಳ ವೃತ್ತದ ಕಛೇರಿಯನ್ನು ಧಾರವಾಡ ವೃತ್ತಕ್ಕೆ ಸೇರ್ಪಡೆಯಾಗಿದ್ದು ಕರ್ನಾಟಕ ಸರ್ಕಾರ ಆದೇಶ ಮಾಡಿದ್ದು ಅಳ್ನಾವರ ತಾಲೂಕು ಸಾರ್ವಜನಿಕರು, ಹಾಗೂ ಎಲ್ಲಾ ಪಕ್ಷದ ಮುಖಂಡರು, ಕಟ್ಟಿಗೆ ಉದ್ಯಮೆದಾರರು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸಂತೋಷ್ ಲಾಡ್ ಹಾಗೂ ಅರಣ್ಯ ಸಚಿವ ಶ್ರೀ ಈಶ್ವರ ಖಂಡ್ರೆ ಅಭಿನಂದನೆ ಸಲ್ಲಿಸಿದ್ದಾರೆ.
ಅಳ್ನಾವರ ನೂತನ ತಾಲೂಕು ಸಾಮಿಲ್ ನಿರ್ವಹಣ, ಟ್ರೀ ಪಾರ್ಕ್ ಹಾಗೂ ನೌಕರರ ವಸತಿಗೃಹಗಳನ್ನು ಹಳಿಯಾಳದಿಂದ ವರ್ಗಾಯಿಸಿದ್ದು. ಕೆಲವು ಜನರು ಹಲ್ಯಾಳದಿಂದ ಧಾರವಾಡಕ್ಕೆ ವರ್ಗಾಯಿಸಬಾರದೆಂದು ಪ್ರಯತ್ನ ಮಾಡುತ್ತಿದ್ದು ತಿಳಿದ ವಿಷಯವಾಗಿದೆ .