DHARWAD:ಗ್ಯಾರಂಟಿ ಯೋಜನೆಯ ಸಮಿತಿ ಸಭೆ ಯಶಸ್ವಿ.

ಗ್ಯಾರಂಟಿ ಯೋಜನೆಯ  ಸಮಿತಿ ಸಭೆ ಯಶಸ್ವಿ. 
  ಧಾರವಾಡ : ತಾಲೂಕ ಪಂಚಾಯತ ಸಭಾ ಭವನದಲ್ಲಿ , ಅರವಿಂದ ಏಗನಗೌಡರ,  ಅಧ್ಯಕ್ಷ ಧಾರವಾಡ - 71 ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ರವರ ಅಧ್ಯಕ್ಷತೆಯಲ್ಲಿ  ಗ್ಯಾರಂಟಿ ಯೋಜನೆಯ  ಸಮಿತಿ ಸಭೆಯು ಯಶಸ್ವಿಯಾಗಿ ಜರುಗಿತು, ಈ ಸಂಧರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅರವಿಂದ ಏಗನಗೌಡರ ಮಾತನಾಡಿ, ರಾಜ್ಯ ಸರ್ಕಾರದ ಈ ಐದು ಯೋಜನೆಗಳು ಅರ್ಹ ಪಲಾನುಭವಿಗಳಿಗೆ ತಲಪಿಸುವ ಜವಾಬ್ದಾರಿಯು ನಮ್ಮದಾಗಿದ್ದು, ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿದಾಗ ಮಾತ್ರ ಅದು ಸಾಧ್ಯ ಎಂದರು,ಹಾಗೂ ಬಸ್ ನಿರ್ವಾಹಕರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಷಯಗಳು ಗಮನಕ್ಕೆ ಬಂದಿದ್ದು, ಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕು ಹಾಗೂ ಮಹಿಳಾ ಪ್ರಯಾಣಿಕರೊಂದಿಗೆ ಗೌರವಯುತವಾಗಿ ವರ್ತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
     ಇದೆ ಸಂದರ್ಭದಲ್ಲಿ  ಯುವ ನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯ ಮಾಹಿತಿ ಪತ್ರ ಬಿಡುಗಡೆ ಮಾಡಲಾಯಿತು.
ಸದರ ಸಭೆಯಲ್ಲಿ  ಗಂಗಾಧರ ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಧಾರವಾಡ ಹಾಗೂ ಸದಸ್ಯ ಕಾರ್ಯದರ್ಶಿಗಳು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಮತ್ತು ಸಮಿತಿಯ ಸದಸ್ಯರುಗಳಾದ ಮಂಜು ಮಸೂತಿ, ಪರಮೇಶ್ವರ ಕರಿಕಟ್ಟಿ, ಚಂದ್ರಶೇಖರ ಕದಂ,ರೇಣುಕಾ ಕಳ್ಳಿಮನಿ,ಕಲಾವತಿ ಭೀಮಕ್ಕನವೆರ, ಮಂಜು ಉಡಕೇರಿ, ಜಾಫರ್ ಕಳ್ಳಿಮನಿ,ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿಗಳು,ವಿವಿಧ ಪದಾಧಿಕಾರಿಗಳು ಹಾಜರಿದ್ದರು.

ನವೀನ ಹಳೆಯದು

نموذج الاتصال